
ಹೆಬ್ರಿ, ನ.08: ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.
ಶನಿವಾರ ಮಧ್ಯಾಹ್ನ ಶ್ರೀ ಗೋಪಾಲಕೃಷ್ಣ ದೇವರ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕಿಯಲ್ಲಿ ಕೂರಿಸಿ ಮೆರವಣಿಗೆ ಮೂಲಕ ಧಾತ್ರಿ ಕಟ್ಟೆಗೆ ಹೋಗಿ, ಸೀಯಳಾಭಿಷೇಕ, ಪಂಚಾಮ್ರತ ಅಭಿಷೇಕ ಹಾಗೂ ಪೂಜಾ ವಿಧಿ ವಿಧಾನದ ಬಳಿಕ ಭೂರಿ ಸಮಾರಾಧನೆ ನಡೆಯಿತು.
ರಾತ್ರಿ ಬೆಳ್ಳಿ ಮಂಟಪದಲ್ಲಿ ನಗರೋತ್ಸವ ನೆರವೇಲಿರದ್ದು, ಮರುದಿವಸ ಅವಭ್ರತ ಸ್ನಾನದ ಮೂಲಕ ಲಕ್ಷದೀಪೋತ್ಸವವು ಸಂಪನ್ನಗೊಳ್ಳಲಿದೆ

The post ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಸಂಭ್ರಮದ ಲಕ್ಷದೀಪೋತ್ಸವ first appeared on karavalinews.com.


